ರೈತರು ಆರ್ಥಿಕವಾಗಿ ಸದೃಢರಾದಾಗ ಮಾತ್ರ ಸಮಾಜವು ಅಭಿವೃದ್ಧಿಯತ್ತ ಸಾಗುತ್ತದೆ. ರೈತರು ಯಾವುದೇ ಕಷ್ಟಗಳಿಗೆ ಎದೆಗುಂದಬಾರದು ಎಂದು ತಹಶಿಲ್ದಾರ್ ಜಿ.ಎ.ನಾರಾಯಣಸ್ವಾಮಿ ತಿಳಿಸಿದರು.
ನಗರದ ನ್ಯಾಯಾಲಯದ ಆವರಣದಲ್ಲಿ ಗುರುವಾರ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಆತ್ಮಹತ್ಯೆ ಮಾಡಿಕೊಳ್ಳದಂತೆ ಅನ್ನದಾತನಿಗೆ ಆತ್ಮಸ್ಥೈರ್ಯ ತುಂಬಲು ರೈತ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಾರುಕಟ್ಟೆಯ ಏರುಪೇರು, ಮಳೆಯ ಅಭಾವ, ಬೆಳೆಗಾಗಿ ಮಾಡಿದ ಸಾಲ ರೈತರನ್ನು ಕಂಗೆಡಿಸಿದೆ. ಆದರೂ ಸಮಾಜದ ಎಲ್ಲಾ ವರ್ಗದವರೂ ರೈತರ ಬೆಂಬಲಕ್ಕೆ ನಿಂತು ಆತ್ಮಸ್ಥೈರ್ಯ ತುಂಬುವ ಕಾರ್ಯ ತುರ್ತಾಗಿ ಆಗಬೇಕಿದೆ ಎಂದು ಹೇಳಿದರು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ ಮಾತನಾಡಿ, ರೈತರು ಸಾಲ ಮಾಡುವುದು ತಪ್ಪಲ್ಲ, ಹಾಗೆಂದು ಸಾಲಕ್ಕೆ ಪ್ರಾಣತ್ಯಾಗ ಮಾಡಬಾರದು. ರೈತರ ಬೆಂಬಲಕ್ಕೆ ವಕೀಲರು ಸಹ ಇರುವುದಾಗಿ ತಿಳಿಸಿದರು.
ಸರ್ಕಾರಿ ವಕೀಲ ಈ.ಡಿ.ಶ್ರೀನಿವಾಸ್, ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ರವಿಪ್ರಕಾಶ್, ಪ್ರತೀಶ್, ಜೆ.ಎಸ್.ವೆಂಕಟಸ್ವಾಮಿ, ಜಿ.ಎಸ್.ಅಕ್ರಂ ಪಾಷ, ಇಮ್ತಿಯಾಜ್ಪಾಷ, ರಹಮತ್ಪಾಷ, ಎಚ್.ಸುರೇಶ್, ಅರಿಕೆರೆ ಮುನಿರಾಜು, ಮೇಲೂರು ನಾಗರಾಜ್, ಬಾಲಮುರಳಿಕೃಷ್ಣ, ನಾರಾಯಣಸ್ವಾಮಿ, ಮುನಿಕೆಂಪಣ್ಣ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -