26.9 C
Sidlaghatta
Thursday, March 27, 2025

ರೇಷ್ಮೆಗೂಡು ಮಾರುಕಟ್ಟೆಗೆ ಅಧಿಕಾರಿ ಡಿ.ರೂಪ ಭೇಟಿ – ರೀಲರ್‌ಗಳ ಬೇಡಿಕೆಗಳಿಗೆ ಭರವಸೆ

- Advertisement -
- Advertisement -

Sidlaghatta : ಕರ್ನಾಟಕ ರೇಷ್ಮೆ ಮಾರಾಟ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕಿ, ಐಪಿಎಸ್ ಅಧಿಕಾರಿ ಡಿ.ರೂಪ ಅವರು ಶಿಡ್ಲಘಟ್ಟದ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆಗೆ ಭೇಟಿ ನೀಡಿ, ಮಾರುಕಟ್ಟೆಯ ಆಡಳಿತ, ರೇಷ್ಮೆಗೂಡಿನ ವಹಿವಾಟು, ಹಣ ಪಾವತಿ, ಮತ್ತು ಹರಾಜು ನೀತಿಗಳ ಬಗ್ಗೆ ಮಾರುಕಟ್ಟೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಇದೇ ವೇಳೆ, ಅಧಿಕಾರಿಗಳು ಹಾಗೂ ರೀಲರ್‌ಗಳೊಂದಿಗೆ ಚರ್ಚೆ ನಡೆಸಿದರು.

ರೇಷ್ಮೆ ಮಾರಾಟ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಮಾರುಕಟ್ಟೆಗೆ ಭೇಟಿ ನೀಡಿದ ಡಿ.ರೂಪ ಅವರಿಗೆ, ಮಾರುಕಟ್ಟೆ ಅಧಿಕಾರಿಗಳು ಇ-ಹರಾಜು, ಇ-ತೂಕ, ಹಾಗೂ ಇ-ಹಣ ಪಾವತಿ ಪ್ರಕ್ರಿಯೆಗಳ ಬಗ್ಗೆ ವಿವರಿಸಿದರು. ಮಾರುಕಟ್ಟೆಗೆ ಬರುವ ರೇಷ್ಮೆಗೂಡಿಗೆ ಸರಿಯಾದ ಜಾಲರಿಗಳನ್ನು ನೀಡಿ, ಪ್ರತಿ ಲಾಟಿಗೆ ಕ್ರಮಾಂಕ ನಿಗದಿಪಡಿಸಲಾಗುತ್ತದೆ. ಈ ಇ-ಹರಾಜು ವ್ಯವಸ್ಥೆಯಲ್ಲಿ, ರೀಲರ್‌ಗಳು ತಮಗೆ ಬೇಕಾದ ರೇಷ್ಮೆಗೂಡಿಗೆ ಬಿಡ್ ನೀಡುವ ವ್ಯವಸ್ಥೆಯಿದೆ. ಹೆಚ್ಚಿನ ಮೊತ್ತದ ಬಿಡ್ ನೀಡುವವರಿಗೆ ಆ ರೇಷ್ಮೆಗೂಡು ಲಾಟು ಒದಗಿಸಲಾಗುತ್ತದೆ. ಆದರೆ, ರೈತರಿಗೆ ಖಂಡಿತಾ ಸಮಾಧಾನಕರ ಬೆಲೆ ಸಿಗಲೇಬೇಕು ಎಂಬ ನಿಟ್ಟಿನಲ್ಲಿ, ಅವರಿಗೂ ತಮ್ಮ ಬಿಡ್ ರದ್ದುಪಡಿಸುವ ಅವಕಾಶವಿದೆ.

ಒಮ್ಮೆ ಹರಾಜು ಪ್ರಕ್ರಿಯೆಯಲ್ಲಿ ಮಾರಾಟವಾಗದಿದ್ದರೆ, ಅದನ್ನು ಎರಡನೇ ಸುತ್ತಿನಲ್ಲಿ ಮತ್ತೆ ಹರಾಜು ಮಾಡಲಾಗುತ್ತದೆ. ಎರಡು ಹಂತಗಳಲ್ಲಿಯೂ ರೈತರು ಸಮಾಧಾನವಾಗದಿದ್ದರೆ, ಅವರು ತಮ್ಮ ರೇಷ್ಮೆಗೂಡನ್ನು ಬೇರೆ ಮಾರುಕಟ್ಟೆಗೆ ಕೊಂಡೊಯ್ಯುವ ಆಯ್ಕೆ ಸಹವಿದೆ. ಹರಾಜು ಮುಗಿದ ನಂತರ, ಎಲೆಕ್ಟ್ರಾನಿಕ್ ತೂಕ ಯಂತ್ರಗಳಲ್ಲಿ ನಿಖರ ತೂಕ ಮಾಡಲಾಗುತ್ತದೆ ಮತ್ತು 24 ಗಂಟೆಗಳೊಳಗೆ ರೈತರ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲಾಗುತ್ತದೆ. ಇದರಿಂದ, ರೇಷ್ಮೆಗೂಡಿನ ಗುಣಮಟ್ಟದ ಆಧಾರದ ಮೇಲೆ ರೈತರಿಗೆ ನ್ಯಾಯವಾದ ಬೆಲೆ ಸಿಗುವುದು ಮತ್ತು ರೀಲರ್‌ಗಳಿಗೆ ಸಹ ಉತ್ತಮ ಗುಣಮಟ್ಟದ ನೂಲ ಲಭ್ಯವಾಗಲಿದೆ ಎಂದು ಅವರು ವಿವರಿಸಿದರು.

ರೀಲರ್‌ಗಳೊಂದಿಗೆ ಚರ್ಚೆ – ಬೆಲೆ ಕುಸಿತದ ಕುರಿತ ಬೇಡಿಕೆಗಳು

ರೇಷ್ಮೆಗೂಡು ಮಾರುಕಟ್ಟೆಗೆ ಭೇಟಿ ನೀಡಿದ ಡಿ.ರೂಪ ಅವರನ್ನು ಭೇಟಿ ಮಾಡಿದ ರೀಲರ್‌ಗಳು, ಇತ್ತೀಚೆಗೆ ರೇಷ್ಮೆನೂಲಿನ ಬೆಲೆ ಕುಸಿತದ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಕಳೆದ ಮೂರು ದಿನಗಳಲ್ಲಿ ಪ್ರತಿ ಕೆಜಿ ರೇಷ್ಮೆನೂಲಿನ ಬೆಲೆಯಲ್ಲಿ ₹300-₹350ರಷ್ಟು ತಕ್ಷಣದ ಇಳಿಮುಖ ಕಂಡುಬಂದಿದ್ದು, ಇದರಿಂದ ಸಣ್ಣ ಮತ್ತು ಮಧ್ಯಮ ರೀಲರ್‌ಗಳಿಗೆ ಭಾರೀ ನಷ್ಟವಾಗುತ್ತಿದೆ ಎಂದು ಅವರು ತಿಳಿಸಿದರು.

ಬೆಲೆ ಕುಸಿದ ಸಂದರ್ಭಗಳಲ್ಲಿ, ರಾಜ್ಯ ಸರ್ಕಾರವೇ ನೇರವಾಗಿ ರೇಷ್ಮೆ ನೂಲವನ್ನು ಖರೀದಿಸಬೇಕು ಮತ್ತು ರೀಲರ್‌ಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲು ಕ್ರಮ ಕೈಗೊಳ್ಳಬೇಕು ಎಂಬುದು ಅವರ ಪ್ರಮುಖ ಬೇಡಿಕೆ. ಇದಕ್ಕಾಗಿ ಹೆಚ್ಚಿನ ಅನುದಾನ ಮೀಸಲಿಡುವಂತೆ ಅವರು ಮನವಿ ಮಾಡಿದರು.

ಭರವಸೆ – ಸಮಗ್ರ ಅಧ್ಯಯನದ ನಂತರ ನಿರ್ಧಾರ

ಈ ಕುರಿತಾಗಿ ಪ್ರತಿಕ್ರಿಯಿಸಿದ ಡಿ.ರೂಪ ಅವರು, “ಇತ್ತೀಚೆಗೆ ಮಾತ್ರವೇ ಕರ್ನಾಟಕ ರೇಷ್ಮೆ ಮಾರಾಟ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕಿಯಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಈ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಬೇಕಿದೆ. ಈ ಕಾರಣಕ್ಕಾಗಿ ರಾಜ್ಯದ ವಿವಿಧ ಮಾರುಕಟ್ಟೆಗಳಿಗೆ ಭೇಟಿ ನೀಡಿ ಅಧ್ಯಯನ ಮಾಡುತ್ತಿದ್ದೇನೆ. ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿದ ನಂತರ, ನಿಗಮದ ಅಧಿಕಾರಿಗಳ ಸಭೆ ನಡೆಸಿ, ನಿಮ್ಮ ಬೇಡಿಕೆ ಈಡೇರಿಸಲು ಸಾಧ್ಯವಿರುವ ಕ್ರಮಗಳ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ” ಎಂದು ಭರವಸೆ ನೀಡಿದರು.

For Daily Updates WhatsApp ‘HI’ to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!