ಪಟ್ಟಣದ ಶಂಕರಮಠ ಬೀದಿಯಲ್ಲಿರುವ ಶಾಮಣ್ಣನ ಬಾವಿಯ ಬಳಿಯ ಪುರಾತನ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ನರಸಿಂಹಜಯಂತಿಯ ಪೌರ್ಣಿಮೆ ಪೂಜೆಯನ್ನು ಬುಧವಾರ ಆಚರಿಸಲಾಯಿತು.
ಐದು ಗರ್ಭಗುಡಿಗಳಿರುವ ಪಟ್ಟಣದ ಏಕೈಕ ಕಲ್ಯಾಣಿ ಇರುವ ಪುರಾತನ ದೇವಾಲಯದಲ್ಲಿ ಸೂರ್ಯನಾರಾಯಣಸ್ವಾಮಿ, ಗಣಪತಿ, ಸುಬ್ರಮಣ್ಯಸ್ವಾಮಿ, ಶ್ರೀಕಂಠೇಶ್ವರ, ಗಿರಿಜಾಂಬ, ಚಂಡಿಕೇಶ್ವರ, ಲಕ್ಷ್ಮೀನರಸಿಂಹಸ್ವಾಮಿ ಮತ್ತು ವೀರಾಂಜನೇಯಸ್ವಾಮಿ ವಿಗ್ರಹಗಳಿವೆ.
ಲಕ್ಷ್ಮೀನರಸಿಂಹಸ್ವಾಮಿ ಜಯಂತಿಯ ಪ್ರಯುಕ್ತ ಮಂಗಳವಾರ ವಿಶೇಷ ಪೂಜೆಯನ್ನು ನಡೆಸಲಾಗಿದ್ದು, ಪಾರಣೆಯ ಪೂಜೆಯ ಪ್ರಯುಕ್ತ ಬುಧವಾರವೂ ವಿಶೇಷ ಪೂಜೆಯನ್ನು ಆಯೋಜಿಸಿದ್ದರಿಂದ ಅನೇಕ ಭಕ್ತರು ಪೂಜೆಯಲ್ಲಿ ಪಾಲ್ಗೊಂಡಿದ್ದರು. ದೇವರುಗಳಿಗೆಲ್ಲಾ ವಿವಿಧ ಹೂಗಳಿಂದ ಅಲಂಕರಿಸಿದ್ದು, ಪಂಚಾಮೃತಾಭಿಷೇಕ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಸಲಾಯಿತು.
ಪುರಸಭಾ ಸದಸ್ಯೆ ಸುಗುಣಾ ಲಕ್ಷ್ಮಿನಾರಾಯಣ್, ಎ.ಎಸ್.ರವಿ, ಅನಂತಕೃಷ್ಣ, ಎಸ್.ವಿ.ನಾಗರಾಜರಾವ್, ವಿ.ಕೃಷ್ಣ, ಅರ್ಚಕ ರಾಜಶೇಖರ್, ಸಾಯಿಈಶ ಮತ್ತಿತರರು ಹಾಜರಿದ್ದರು.