Home News ರೈಲಿಗೆ ಸಿಲುಕಿ ಯುವಕ ಸಾವು

ರೈಲಿಗೆ ಸಿಲುಕಿ ಯುವಕ ಸಾವು

0

ರೈಲಿಗೆ ಯುವಕನೋರ್ವ ಸಿಲುಕಿ ಬುಧವಾರ ಮುಂಜಾನೆ ಮೃತಪಟ್ಟಿದ್ದಾನೆ.
ನಗರದ ಕದಿರಿಪಾಳ್ಯದ ನಿವಾಸಿ ಜಗದೀಶ್ ಅಲಿಯಾಸ್ ಪಾಳ್ಯಮು(೩೦) ಮೃತಪಟ್ಟ ಯುವಕನಾಗಿದ್ದು, ಆತ್ಮಹತ್ಯೆಯಿರಬಹುದೆಂದು ಶಂಕಿಸಲಾಗಿದೆ.
ಕೋಲಾರದಿಂದ ಚನ್ನಪಟ್ಟಣಕ್ಕೆ ತೆರಳುವ ರೈಲು ಶಿಡ್ಲಘಟ್ಟ ರೈಲು ನಿಲ್ದಾಣ ಪ್ರವೇಶಿಸುವ ಮುನ್ನ ಗಾಂಧಿನಗರದ ಸೇತುವೆ ಮೇಲೆ ಈ ದುರ್ಘಟನೆ ನಡೆದಿದ್ದು, ಹಳಿಯ ಮೇಲೆ ನಿಂತಿದ್ದ ಯುವಕ ರೈಲಿಗೆ ತಾಕಿ ಕೆಳಗುರುಳಿಬಿದ್ದು ಸಾವನ್ನಪ್ಪಿದ್ದಾನೆ.