Home News ಜಂಗಮಕೋಟೆ ರೇಷ್ಮೆ ಬೆಳೆಗಾರರ ಸೇವಾ ಸಹಕಾರ ಸಂಘ ಕಾಂಗ್ರೆಸ್ ವಶ

ಜಂಗಮಕೋಟೆ ರೇಷ್ಮೆ ಬೆಳೆಗಾರರ ಸೇವಾ ಸಹಕಾರ ಸಂಘ ಕಾಂಗ್ರೆಸ್ ವಶ

0

ತಾಲ್ಲೂಕಿನ ಜಂಗಮಕೋಟೆ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ೬ ಅಭ್ಯರ್ಥಿಗಳು ಜೆ.ಡಿ.ಎಸ್ ಬೆಂಬಲಿತ ಮೂವರು ಅಭ್ಯರ್ಥಿಗಳು, ಕಾಂಗ್ರೆಸ್ ಬಂಡಾಯ ಒಬ್ಬರು, ಗೆಲ್ಲುವ ಮೂಲಕ, ಸಹಕಾರ ಸಂಘವು ಕಾಂಗ್ರೆಸ್ ವಶವಾಗಿದೆ.
ಈಚೆಗೆ ನಡೆದ ಚುನಾವಣೆಯಲ್ಲಿ ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ವೈ.ಬಿ.ಗಣೇಶ್, ಎಚ್.ಎಂ.ಮಂಜುನಾಥಗೌಡ, ಜೆ.ಎನ್.ಹನುಮಂತಪ್ಪ, ಮಹಿಳಾ ಮೀಸಲು ಸಾಲಗಾರರ ಕ್ಷೇತ್ರದಿಂದ ಮುನಿರತ್ನಮ್ಮ, ಎಂ.ಮಂಜುಳ, ಸಾಲಗಾರರ ಹಿಂದುಳಿದ ಮೀಸಲು ಎ ವರ್ಗದಿಂದ ಕೆ.ಎನ್.ಮುನಿರಾಜು ಕಾಂಗ್ರೆಸ್ ಬೆಂಬಲಿತರಾಗಿ ಆಯ್ಕೆಯಾಗಿದ್ದಾರೆ. ಠೇವಣಿದಾರರ ಕ್ಷೇತ್ರದಿಂದ ಎ.ಪಿ.ಮುನೇಗೌಡ ಲಾಟರಿ ಮೂಲಕ ಆಯ್ಕೆಯಾದರೆ, ಸಾಲಗಾರರಲ್ಲದ ಕ್ಷೇತ್ರದಿಂದ ಜೆ.ಡಿ.ಎಸ್ ಬೆಂಬಲಿತ ಬಿ.ಎಂ.ರಘುನಾಥ್, ಸಾಲಗಾರರ ಕ್ಷೇತ್ರ ಪರಿಶಿಷ್ಟ ಜಾತಿ/ವರ್ಗ ಮೀಸಲು ಕ್ಷೇತ್ರದಿಂದ ಜೆ.ಎಂ.ವೆಂಕಟೇಶ್, ಸಾಲಗಾರರ ಹಿಂದುಳಿದ ಮೀಸಲು ಎ ವರ್ಗದಿಂದ ಜೆ.ಎನ್.ಶ್ರೀನಿವಾಸ್‌ರವರುಗಳು ಆಯ್ಕೆಯಾಗಿರುವರು.
ಚುನಾವಣಾಧಿಕಾರಿಗಳಾಗಿ ಡಿ.ವಿ.ಮಂಜುನಾಥ್‌ರಾವ್, ವ್ಯವಸ್ಥಾಪಕರಾದ ನಾಗರಾಜು, ಚುನಾವಣಾ ಕಾರ್ಯನಿರ್ವಹಿಸಿದ್ದರು.

error: Content is protected !!