ರೇಷ್ಮೆ ನೂಲು ಬಿಚ್ಚಾಣಿಕೆದಾರರ ಕೈಗಾರಿಕಾ ಸಹಕಾರ ಸಂಘದಲ್ಲಿ ಸದಸ್ಯರೂ ಸೇರಿದಂತೆ ವಿವಿಧ ರೀಲರ್ಗಳು ಗಿರವಿ ಇಟ್ಟಿದ್ದ ರೇಷ್ಮೆಯನ್ನು ಸೋಮವಾರ ಇಲಾಖಾಧಿಕಾರಿಗಳ ಸಮ್ಮುಖದಲ್ಲಿ ಬಹಿರಂಗ ಹರಾಜು ಮಾಡಲಾಯಿತು.
ನಗರದ ಒಂದನೇ ಟಿ.ಎಂ.ಸಿ.ಬಡಾವಣೆಯಲ್ಲಿರುವ ಶಿಡ್ಲಘಟ್ಟ ರೇಷ್ಮೆ ನೂಲು ಬಿಚ್ಚಾಣಿಕೆದಾರರ ಕೈಗಾರಿಕಾ ಸಹಕಾರ ಸಂಘ ಕಳೆದ ೧೫ ವರ್ಷಗಳ ಹಿಂದೆ ನಿಂತುಹೋಗಿತ್ತು. ಸಂಘದಲ್ಲಿ ಸದಸ್ಯರಾಗಿದ್ದ ಕೆಲವು ಮಂದಿ ಸದಸ್ಯರು ಹಾಗೂ ರೀಲರ್ಗಳು ಸಹಕಾರ ಸಂಘದಿಂದ ಹಣವನ್ನು ಪಡೆದುಕೊಂಡು ಗಿರವಿ ಇಟ್ಟಿದ್ದ ಸುಮಾರು ೩೦ ಮೂಟೆಗಳಷ್ಟು ರೇಷ್ಮೆಯನ್ನು ಸೋಮವಾರ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಬಹಿರಂಗವಾಗಿ ಹರಾಜು ಮಾಡಲಾಯಿತು.
ಹರಾಜಿನಲ್ಲಿ ಭಾಗವಹಿಸಿದ್ದ ೨೮ ಮಂದಿ ರೀಲರ್ಗಳು ಇ.ಎಂ.ಡಿ ಹಣವಾಗಿ ೧೫ ಸಾವಿರದಂತೆ ಪಾವತಿ ಮಾಡಿ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.
ನಗರಸಭೆ ಸದಸ್ಯ ಅಫ್ಸರ್ಪಾಷ, ರೀಲರ್ಗಳಾದ ಅಕ್ಮಲ್ಪಾಷ, ಸೈಯ್ಯದ್, ರೆಹಮಾನ್, ವೆಂಕಟೇಶ್, ಮುನೀಂದ್ರ ಮತ್ತಿತರರು ಹರಾಜಿನಲ್ಲಿ ಪಾಲ್ಗೊಂಡಿದ್ದರು.
- Advertisement -
- Advertisement -
- Advertisement -
- Advertisement -