ಪಿ. ಎಲ್. ಡಿ ಬ್ಯಾಂಕ್ ಮಾಜಿ ಅಧ್ಯಕ್ಷ, ಮಾಜಿ ಪುರಸಭೆ ಸದಸ್ಯ, ಜೆಡಿಎಸ್ ಮುಖಂಡ ಹಾಗೂ ಯಾದವ ಜನಾಂಗದ ಮುಖಂಡ ಓ.ಟಿ.ಮುನಿಕೃಷ್ಣಪ್ಪರವರು(೫೪) ಸೋಮವಾರ ಮುಂಜಾನೆ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ತಾಯಿ, ಪತ್ನಿ ಹಾಗೂ ೨ ಹೆಣ್ಣು ೨ ಗಂಡು ಮಕ್ಕಳು ಹಾಗೂ ಅಪಾರ ಬಂಧುಮಿತ್ರರನ್ನು ಅವರು ಅಗಲಿದ್ದಾರೆ.
ಶಾಸಕ ಎಂ.ರಾಜಣ್ಣ, ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ಯಾದವ ಜನಾಂಗದ ಅಧ್ಯಕ್ಷರ ಹಾಗೂ ವಕೀಲರಾದ ಯೋಗಾನಂದ, ಮಾಜಿ ಪುರಸಭೆ ಸದಸ್ಯ ಜಗದೀಶ್ವರ್, ದೊಣ್ಣಹಳ್ಳಿ ರಾಮಣ್ಣ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಡಾ.ಧನಂಜಯರೆಡ್ಡಿ, ಯಾದವ ಜನಾಂಗದ ಮುಖಂಡರು, ಕುಟುಂಬ ವರ್ಗದವರು ಮತ್ತು ಸಾರ್ವಜನಿಕರು ಅಂತಿಮ ದರ್ಶನ ಪಡೆದರು.