Home News ಜಪ್ತಿಹೊಸಹಳ್ಳಿ, ಬೋದಗೂರು ಮತ್ತು ಹಿತ್ತಲಹಳ್ಳಿಯಲ್ಲಿ ಕಾಂಕ್ರೀಟ್ ರಸ್ತೆಯ ಕಾಮಗಾರಿಗೆ ಚಾಲನೆ

ಜಪ್ತಿಹೊಸಹಳ್ಳಿ, ಬೋದಗೂರು ಮತ್ತು ಹಿತ್ತಲಹಳ್ಳಿಯಲ್ಲಿ ಕಾಂಕ್ರೀಟ್ ರಸ್ತೆಯ ಕಾಮಗಾರಿಗೆ ಚಾಲನೆ

0

ತಾಲ್ಲೂಕಿನ ಜಪ್ತಿಹೊಸಹಳ್ಳಿ, ಬೋದಗೂರು ಮತ್ತು ಹಿತ್ತಲಹಳ್ಳಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ ಪ್ರಾರಂಭಗೊಂಡ ಸುಮಾರು 19 ಲಕ್ಷ ರೂಪಾಯಿಗಳ ಕಾಂಕ್ರೀಟ್ ರಸ್ತೆಯ ಕಾಮಗಾರಿಗಳನ್ನು ಶಾಸಕ ಎಂ.ರಾಜಣ್ಣ ಶನಿವಾರ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ತಾಲ್ಲೂಕಿನ ಜಪ್ತಿಹೊಸಹಳ್ಳಿ, ಬೋದಗೂರು ಮತ್ತು ಹಿತ್ತಲಹಳ್ಳಿಗಳ ಹರಿಜನ ಕಾಲೋನಿಗಳಲ್ಲಿ ತಲಾ ಆರೂ ಕಾಲು ಲಕ್ಷ ರೂಪಾಯಿಗಳ ಸಿಮೆಂಟ್ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಎಂ.ರಾಜಣ್ಣ,‘ಆನೂರು ಗ್ರಾಮ ಪಂಚಾಯತಿಯ ಆರು ಗ್ರಾಮಗಳಾದ ಆನೂರು, ಜಪ್ತಿಹೊಸಹಳ್ಳಿ, ಬೋದಗೂರು, ಹಿತ್ತಲಹಳ್ಳಿ, ದಬರಗಾನಹಳ್ಳಿ, ಬೈರನಾಯಕನಹಳ್ಳಿಗಳಲ್ಲಿ ಮೂರು ಇಲಾಖೆಗಳಿಂದ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಗಳು ವಾಸಿಸುವ ಪ್ರದೇಶಗಳಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕಾಗಿ ಕಾಮಗಾರಿ ಪ್ರಾರಂಭಿಸಲಾಗಿದೆ. ನನ್ನ ಕ್ಷೇತ್ರದ 90 ಹಳ್ಳಿಗಳಲ್ಲಿ ಕಾಮಗಾರಿಗಳು ನಡೆಯಲಿವೆ. ಸಣ್ಣ ನೀರಾವರಿ ಇಲಾಖೆ , ಸಮಾಜ ಕಲ್ಯಾಣ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ವತಿಯಿಂದ ಅನುದಾನಗಳು ಬಿಡುಗಡೆಯಾಗಿದ್ದು ಮೂಲಭೂತ ಸೌಕರ್ಯಗಳು ವೃದ್ಧಿಸಲಿವೆ’ ಎಂದು ಹೇಳಿದರು.
ಕೋಚಿಮುಲ್ ನಿರ್ದೇಶಕ ಮುನಿಯಪ್ಪ, ಪಿ.ವಿ.ನಾಗರಾಜ್, ಆನೂರು ಗ್ರಾಮ ಪಂಚಾಯತಿ ಅಧ್ಯಕ್ಷ ನಂಜುಂಡಪ್ಪ, ಲಕ್ಷ್ಮೀಪತಿ, ಸೂರ್ಯನಾರಾಯಣಗೌಡ, ಗುತ್ತಿಗೆದಾರ ಚನ್ನಕೇಶವ, ಎ.ಇ.ಇ ಜಮೀರ್ ಅಹಮದ್, ಮಳ್ಳೂರಯ್ಯ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.