Home News ಖರೀದಿ ಮಾಡುವ ವಸ್ತುಗಳ ರಸೀದಿ ಪಡೆಯಿರಿ

ಖರೀದಿ ಮಾಡುವ ವಸ್ತುಗಳ ರಸೀದಿ ಪಡೆಯಿರಿ

0

ಮಕ್ಕಳು ಯಾವುದೇ ವಸ್ತುಗಳನ್ನು ಖರೀದಿ ಮಾಡಲು ಹೋದಾಗ ಅಂಗಡಿ ಮಾಲೀಕರಿಂದ ರಸೀದಿ ಪಡೆಯುವುದನ್ನು ರೂಢಿ ಮಾಡಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ ಹೇಳಿದರು.
ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ರಾಘವೇಂದ್ರ ಟ್ರಸ್ಟ್ ಫಾರ್ ಎಜುಕೇಷನ್, ಮತ್ತು ಎನ್ವೈರ್ನ್ಮೆಂಟಲ್ ಆಕ್ಷನ್ ಫಾರ್ ನೀಡ್ಸ್ ಸ್ವಯಂ ಸೇವಾ ಸಂಸ್ಥೆಯ ಸಹಯೋಗದಲ್ಲಿ ಆಯೋಜನೆ ಮಾಡಲಾಗಿದ್ದ ಶಾಲಾ ಮಕ್ಕಳ ಗ್ರಾಹಕರ ಕ್ಲಬ್ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಗ್ರಾಹಕರು ಖರೀದಿ ಮಾಡುವಂತಹ ಪ್ರತಿಯೊಂದು ವಸ್ತುಗಳಿಗೆ ಕಡ್ಡಾಯವಾಗಿ ರಸೀದಿಯನ್ನು ಪಡೆದುಕೊಳ್ಳುವುದು ಅವರ ಕರ್ತವ್ಯವಾಗಿರುತ್ತದೆ, ಖರೀದಿ ಮಾಡಿರುವ ವಸ್ತುಗಳ ಗುಣಮಟ್ಟ, ತೂಕದ ಪ್ರಮಾಣ, ತಯಾರಾದ ದಿನಾಂಕ, ಅವಧಿ ಮುಗಿಯುವ ದಿನಾಂಕ, ಖರೀದಿ ಮಾಡಿರುವ ವಸ್ತುವಿನ ಬೆಲೆ, ಎಲ್ಲವನ್ನೂ ಪರೀಕ್ಷಿಸಿದ ನಂತರವೇ ಖರೀದಿ ಮಾಡಬೇಕು. ಈ ಬಗ್ಗೆ ಶಾಲೆಗಳಲ್ಲಿ ಒಂದು ಅವಧಿಯಲ್ಲಿ ಗ್ರಾಹಕರ ಹಕ್ಕುಗಳ ಬಗ್ಗೆ ತರಗತಿಗಳನ್ನು ನಡೆಸಲಾಗುತ್ತದೆ. ಶಿಕ್ಷಕರು ಹೇಳುವಂತಹ ಪ್ರತಿಯೊಂದು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಖರೀದಿ ಮಾಡುವಂತೆ ಮಕ್ಕಳು ತಮ್ಮ ಪೋಷಕರಿಗೆ ತಿಳಿಸಬೇಕು ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಕೆ.ಸುಮಾ ಮಾತನಾಡಿ, ಮಕ್ಕಳು ಚಿಕ್ಕವಯಸ್ಸಿನಲ್ಲಿ ಕಲಿಯುವಂತಹ ವಿಚಾರಗಳು ಮನಸ್ಸಿನಲ್ಲಿ ಬೇರೂರುತ್ತವೆ. ತಮ್ಮ ಹಕ್ಕುಗಳನ್ನು ಅವರು ತಿಳಿದುಕೊಳ್ಳಬೇಕು. ನಿಮಗೆ ಆಗುವಂತಹ ಅನ್ಯಾಯಗಳ ಬಗ್ಗೆ ಪ್ರಶ್ನಿಸುವಂತಹ ಹಕ್ಕು ನಿಮಗಿದೆ. ಅನ್ಯಾಯವಾದಾಗ ಎದುರಿಸುವಂತಹ ಸಾಮರ್ಥ್ಯವನ್ನು ಬೆಳೆಸಿಕೊಂಡು ಶಿಕ್ಷಣದ ಜೊತೆಗೆ ವ್ಯವಹಾರಿಕ ಜ್ಞಾನವನ್ನೂ ಪಡೆದುಕೊಳ್ಳಬೇಕು ಎಂದರು.
ಅಶ್ವಥ್ಥನಾರಾಯಣ, ಸಿ.ಆರ್.ಪಿ.ಚೌಡರೆಡ್ಡಿ, ಮುಖ್ಯಶಿಕ್ಷಕಿ ಮಂಜುಳಾ, ಶಂಕರನಾರಾಯಣರೆಡ್ಡಿ, ಆರ್.ಟಿ.ಇ,ಇ,ಎ,ಎನ್ ಸ್ವಯಂ ಸೇವಾ ಸಂಸ್ಥೆಯ ಕಾರ್ಯದರ್ಶಿ ಬಿ.ವಿ.ಅಶ್ವಥ್ಥನಾರಾಯಣಶೆಟ್ಟಿ, ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.