Home News ಅಂಗವಿಕಲರು ಶಾಪಗ್ರಸ್ಥರಲ್ಲ

ಅಂಗವಿಕಲರು ಶಾಪಗ್ರಸ್ಥರಲ್ಲ

0

ಶ್ರವಣ ದೋಷ ಉಳ್ಳವರು ಹಾಗೂ ಇನ್ನಿತರೆ ಅಂಗವಿಕಲರನ್ನು ಶಾಪಗ್ರಸ್ಥರೆಂದು ಪರಿಭಾವಿಸಬೇಕಿಲ್ಲ ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಎನ್.ಎ.ಶ್ರೀಕಂಠ ತಿಳಿಸಿದರು.
ನಗರದ ಡಾಲ್ಫಿನ್ ವಿದ್ಯಾಸಂಸ್ಥೆಯಲ್ಲಿ ಅಂಗವಿಕಲರ ಹಾಗೂ ಸಬಲೀಕರಣ ಇಲಾಖೆ ಮತ್ತು ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಲಿಟಿ (ಎ.ಪಿ.ಡಿ) ಮಂಗಳವಾರ ಆಯೋಜಿಸಿದ್ದ ವಿಶ್ವ ವಾಕ್ ಮತ್ತು ಶ್ರವಣದೋಷವುಳ್ಳ ವ್ಯಕ್ತಿಗಳ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಂಗವಿಕಲರಲ್ಲೂ ಹಲವಾರು ಮಂದಿ ಸಾಧಕರಿದ್ದಾರೆ. ಅಂಗವಿಕಲತೆಯಿರುವ ಕಾರಣಕ್ಕೆ ಮಕ್ಕಳನ್ನು ಮನೆಯಲ್ಲಿ ಬಂಧಿಸಬೇಡಿ. ಅಂಗವಿಕಲರು ಸಾಮಾನ್ಯರಿಗಿಂತ ಬುದ್ಧಿವಂತರಾಗಿದ್ದು, ಅಂಗವಿಕಲತೆಯನ್ನು ಯಾರು ಬೇಡಿ ಪಡೆದಿರುವುದಿಲ್ಲ. ಪ್ರಕೃತಿಯ ಈ ವೈರುದ್ಯವನ್ನು ನಾವು ಒಪ್ಪಿಕೊಂಡು ಅಂಗವಿಕಲತೆಯನ್ನು ಸವಾಲಾಗಿ ಜಯಿಸಬೇಕಿದೆ. ಅಂಗವಿಕಲರಾಗಿ ಸಾಧನೆ ಮಾಡಿದ ಹಲವು ಪ್ರತಿಭಾನ್ವಿತರು ನಮ್ಮೊಡನೆಯಿದ್ದು. ಸಾಧಕ ಅಂಗವಿಕಲರನ್ನು ಮಾದರಿಯಾಗಿಸಿಕೊಂಡು ಬದುಕಲ್ಲಿ ಸಾಧನೆ ಮಾಡಬೇಕಿದೆ. ನೀವು ಯಾರಿಗೂ ಕಡಿಮೆಯಿಲ್ಲ ಎಂದು ಅಂಗವಿಕಲರನ್ನು ಹುರಿದುಂಬಿಸಿದರು.
ಕಾರ್ಯಕ್ರಮದಲ್ಲಿ ಎಲ್ಲಾ ಗಣ್ಯರ ಭಾಷಣವನ್ನೂ ಎ.ಪಿ.ಡಿ ಸಂಸ್ಥೆಯ ಸದಸ್ಯರು ಶ್ರವಣ ದೋಷ ಉಳ್ಳವರಿಗೆ ಅರ್ಥವಾಗುವ ಕೈ ಬಾಯಿಯ ಅಭಿನಯದ ಭಾಷೆಯ ಮೂಲಕ ಅಭಿವ್ಯಕ್ತಿಸಿದರು.
ಈ ಸಂದರ್ಭದಲ್ಲಿ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಾಕ್ ಮತ್ತು ಶ್ರವಣದೋಷವುಳ್ಳ ಮಕ್ಕಳಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನಗಳನ್ನು ವಿತರಿಸಲಾಯಿತು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಡಾಲ್ಫಿನ್ ವಿದ್ಯಾಸಂಸ್ಥೆಯ ಅಶೋಕ್, ರಾಮಚಂದ್ರಪ್ಪ, ಎ.ಪಿ.ಡಿ ಸಂಸ್ಥೆಯ ಶಿಕ್ಷಣ ಸಂಯೋಜಕ ಜೆ.ಮುನಿನಾರಾಯಣ, ಡಾಲ್ಫಿನ್ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕ ಮುನಿಶಾಮಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.